tag:blogger.com,1999:blog-51000081578601884782024-03-08T10:22:50.729+05:30ಮೊದಲ ಮಳೆಮನದ ಮೋಡ ಕರಗಿದಾಗ ಅಕ್ಷರಗಳ ಹನಿ..........ಸತೀಶ್ ಪೂಜಾರhttp://www.blogger.com/profile/09784897328590782695noreply@blogger.comBlogger6125tag:blogger.com,1999:blog-5100008157860188478.post-11033737027483657672020-04-05T13:25:00.000+05:302020-04-05T13:25:28.713+05:30ನಿನ್ನ ಪ್ರೀತಿಗೆ, ಅದರ ರೀತಿಗೆ ಕಣ್ಣ ಹನಿಗಳೆ ಕಾಣಿಕೆ<div dir="ltr" style="text-align: left;" trbidi="on">
<div style="text-align: justify;">
"ನಿನ್ನ ಪ್ರೇಮದ ಪರಿಯ ನಾನರಿಯೇ ಕನಕಾಂಗಿ..." ಸಿ. ಅಶ್ವಥ್ ರವರ ಹಾಡು ಹಾಗೇ ಮುಂದುವರೆದಿತ್ತು. ಖಾಲಿ ರಸ್ತೆ, ಮಧ್ಯಾಹ್ನದ ಬಿರುಬಿಸಿಲಿನಲ್ಲಿ ಕಾರು ಹಾಗೆಯೇ ಸಾಗುತ್ತಲಿತ್ತು.</div>
<div style="text-align: justify;">
</div>
<div style="text-align: justify;">
ಎಲ್ಲಿಗೆ ಹೊರಟಿದ್ದೇನೆ ಎಂಬ ಗುರಿಯೂ ಇಲ್ಲದೆ, ಎಲ್ಲಿಗೆ ಹೋಗಬೇಕೆಂಬ ಗೊಂದಲವೂ ಇಲ್ಲದೆ ಆದಿತ್ಯ ನೆಮ್ಮದಿಯನ್ನು ಹುಡುಕಿ ಹೊರಟಿದ್ದ. ಖಾಲಿ ರಸ್ತೆ, ಸುತ್ತಲೂ ಮರುಭೂಮಿ, ನನ್ನ ಜೀವನವೂ ಹೀಗೆ ಖಾಲಿಯಾಯಿತಾ ಎನ್ನುವ ಅನುಮಾನವೊಂದು ಕಾಡಲಾರಂಭಿಸಿತು.</div>
<div style="text-align: justify;">
<br /></div>
<div style="text-align: justify;">
ಹೌದು, ಒಂದು ವರ್ಷದ ಹಿಂದೆ ಎಷ್ಟು ಚೆನ್ನಾಗಿತ್ತು ಜೀವನ. ಒಳ್ಳೆ ಕೆಲಸ, ಕೈತುಂಬ ಸಂಬಳ, ಕಾರು, ಮನೆ ಎಲ್ಲವೂ ಇತ್ತು. </div>
<div style="text-align: justify;">
</div>
<div style="text-align: justify;">
ಎಲ್ಲವನ್ನೂ ನೆನೆಯುತ್ತ ನೆನಪಿನಂಗಳಕ್ಕೆ ಜಾರಿದ ಆದಿತ್ಯ. </div>
<div style="text-align: justify;">
<br /></div>
<div style="text-align: justify;">
--------------------*--------------------*---------------------</div>
<div style="text-align: justify;">
<br /></div>
<div style="text-align: justify;">
ಮಳೆಗಾಲ.. ಸುತ್ತಲೂ ಮಲೆನಾಡಿನ ಹಸಿರು.. ಎಷ್ಟು ಹೊತ್ತಾದರೂ ಬಿಡದ ಜಿಟಿ ಜಿಟಿ ಮಳೆ.. ಸುತ್ತಲೂ ನಿಸರ್ಗದ ಸೌಂದರ್ಯವನ್ನೇ ಹೊತ್ತು ನಿಂತಿರುವ ಹಸಿರು ಬೆಟ್ಟ ಗುಡ್ಡಗಳು, ಕಾಡು, ಅರಳಿ ನಿಂತಿರುವ ಹೂಗಳು, ಮಳೆಗೆ ಖುಷಿಯಾಗಿ ಅರಚುತ್ತಿರುವ ಕಪ್ಪೆಗಳು, ಅಬ್ಬಾ ಮಳೆಗಾಲದ ಅನುಭವವೇ ಬೇರೆ. ಅದರಲ್ಲೂ ಮಲೆನಾಡಿನ ಪ್ರಕೃತಿ ಸೊಬಗಿನ ಮುಂದೆ ಯಾವ ಸ್ವರ್ಗವೂ ಇಲ್ಲ.</div>
<div style="text-align: justify;">
<br /></div>
<div style="text-align: justify;">
ಪ್ರಕೃತಿಯ ಸೊಬಗನ್ನು ಸವಿಯುತ್ತ ಬೆಂಗಳೂರಿನ ಕಡೆಗೆ ಪ್ರಯಾಣ ಬೆಳೆಸಿದ್ದ ಆದಿತ್ಯ. </div>
<div style="text-align: justify;">
<br /></div>
<div style="text-align: justify;">
ಅಬ್ಬಾ ಇಲ್ಲಿಯವರೆಗೂ ಬೆಂಗಳೂರಿನ ಬಗ್ಗೆ ಕೇಳಿದ್ದಷ್ಟೇ. ಯಾರನ್ನೇ ಕೇಳಿದರೂ ಬಗೆ ಬಗೆಯ ಕಥೆಗಳು, ವರ್ಣನೆಗಳು ಎಲ್ಲರದೂ ವಿಭಿನ್ನ ಅನುಭವವೇ. </div>
<div style="text-align: justify;">
<br /></div>
<div style="text-align: justify;">
ಬೆಂಗಳೂರು.. ಮಾಯಾನಗರಿ...!</div>
<div style="text-align: justify;">
<br /></div>
<div style="text-align: justify;">
ಮೊದಲ ಬಾರಿಗೆ ಬೆಂಗಳೂರಿಗೆ ಹೊರಟಾಗ ಕೌತುಕ, ಭಯ, ಖುಷಿ, ಮಾಯಾನಗರಿಯ ಬಗ್ಗೆ ಭಿನ್ನ ವಿಭಿನ್ನ ಕುತೂಹಲಗಳೆಲ್ಲವೂ ಆವರಿಸಿತ್ತು ಮನದೊಳಗೆ.<br />
<br />
ಹೊರಡುವ ಮುಂಚೆ ಅಮ್ಮ ತೋರಿದ ಕಾಳಜಿ, ಆಚೆ ಚೆನ್ನಾಗಿರೋ ಕಡೆನೇ ಊಟ ಮಾಡು, ಜಾಸ್ತಿ ಸುತ್ತಾಡಬೇಡ, ಆರೋಗ್ಯ ನೋಡಿಕೊ ಎಂಬೆಲ್ಲ ಮಾತುಗಳೊಂದಿಗೆ ಪ್ರೀತಿಯಿಂದ ಮಾಡಿದ ತಿಂಡಿ ತಿನಿಸುಗಳೆಲ್ಲವನ್ನೂ ಆದಿತ್ಯನಿಗೇ ತುಂಬಿಸಿ ಕೊಟ್ಟಿದ್ದಳು ಅಮ್ಮ.<br />
<br />
ಇನ್ನು ಅಪ್ಪ ಹೇಳಿದ ಮಾತುಗಳು, ಯಾರೊಂದಿಗೆ ವ್ಯವಹರಿಸುವಾಗಲೂ ಹುಷಾರು, ಹಣ ಭದ್ರವಾಗಿಟ್ಟುಕೊ, ಪ್ರತಿದಿನ ಫೋನ್ ಮಾಡು ಎಂಬ ಸಲಹೆಗಳು ಆದಿತ್ಯನ ಮೇಲಿರುವ ಪ್ರೀತಿಯನ್ನು ವಿಭಿನ್ನ ಬಗೆಯಿಂದಲೇ ವ್ಯಕ್ತಪಡಿಸಿದ್ದರು ಅಪ್ಪ.<br />
<br />
ಅಂತೂ ಬೇರೆಯವರ ವರ್ಣನೆಯಿಂದಲೇ ಕೇಳಿ ತಿಳಿದಿದ್ದ ಬೆಂಗಳೂರಿನ ಅನುಭವವನ್ನು ಸ್ವತಃ ಆದಿತ್ಯನೇ ಅನುಭವಿಸುವ ಕಾಲ ಕೂಡಿ ಬಂದಿತ್ತು.<br />
<br />
ಇನ್ನೇನು ಬಸ್ಸು ಬೆಂಗಳೂರಿಗೆ ಸನಿಹವಾಗುತ್ತಿದೆ ಎಂದಾಗ ಎದೆ ಬಡಿತವೂ ಜಾಸ್ತಿಯಾಗಿತ್ತು.<br />
<br />
ಅಂತೂ ಬಸ್ಸು ಬೆಂಗಳೂರಿಗೆ ಬಂತು. ಬಸ್ಸನ್ನಿಳಿದು ಮೆಜೆಸ್ಟಿಕ್ ನಲ್ಲಿ ಬೆರಗಿನ ಕಣ್ಣುಗಳಿಂದಲೇ ಅತ್ತಿತ್ತ ನೋಡುತ್ತಾ ನಿಂತಿದ್ದ ಆದಿತ್ಯ.</div>
<div style="text-align: justify;">
<br /></div>
<div style="text-align: justify;">
----------------------*------------------------*----------------------<br />
<br />
ಪ್ರಕೃತಿ.. ಬರೀ ಮಾತಿನಿಂದಲೇ ಜಗತ್ತನ್ನು ಗೆಲ್ಲಬಲ್ಲೆನೆಂಬ ಹುಮ್ಮಸ್ಸು, ಮುದ್ದು ಮುಖ, ಪ್ರಕೃತಿಯ ಎಲ್ಲವನ್ನೂ ಕೌತುಕದಿಂದಲೇ ಕಾಣುವ ಹೊಳೆಯುವ ಕಣ್ಣುಗಳು, ಸೌಂದರ್ಯವನ್ನು ಹೆಚ್ಚಿಸಲೆಂಬಂತೆಯೇ ಗಾಳಿಗೆ ಹಾರಾಡುತ್ತ ಮುಖದ ಮೇಲೆ ಮತ್ತೆ ಮತ್ತೆ ಬರುತ್ತಿರುವ ಮುಂಗುರುಳು, ಬೆಳದಿಂಗಳನ್ನೇ ನಾಚಿಸುವ ಸೌಂದರ್ಯ, ಆತ್ಮವಿಶ್ವಾಸವೇ ಬಲ ಎಂದು ನಂಬಿದ ಹುಡುಗಿ. ಸುರಿವ ತುಂತುರು ಮಳೆಯ ನಡುವೆ ಬಸ್ಸಿಗಾಗಿ ಕಾಯುತ್ತಿದ್ದಳು.<br />
<br />
ಮುಂದುವರೆಯುವದು. . . . . . . .<br />
<br /></div>
<div style="text-align: justify;">
<br /></div>
</div>
ಸತೀಶ್ ಪೂಜಾರhttp://www.blogger.com/profile/09784897328590782695noreply@blogger.com0tag:blogger.com,1999:blog-5100008157860188478.post-2286024853334956652016-05-27T10:36:00.001+05:302016-05-27T10:36:47.102+05:30<div dir="ltr" style="text-align: left;" trbidi="on">
ಗುರಿ ಇರದ ದಾರಿಯಲಿ<br />
ಕಣ್ಮುಚ್ಚಿ ನಡೆವಾಸೆ...<br />
ಮುಂಜಾನೆ ಮಳೆಯಲ್ಲಿ<br />
ಹುಚ್ಚೆದ್ದು ಕುಣಿವಾಸೆ...<br />
ಕೊನೆಯಿರದ ಪ್ರೀತಿಯಲಿ<br />
ಮಿಂದೆದ್ದು ನೆನೆಯುವಾಸೆ...<br />
<div>
<br /></div>
</div>
ಸತೀಶ್ ಪೂಜಾರhttp://www.blogger.com/profile/09784897328590782695noreply@blogger.com0tag:blogger.com,1999:blog-5100008157860188478.post-75195151059994810332016-04-07T17:16:00.004+05:302016-04-07T17:16:56.835+05:30ಯುಗಾದಿ<div dir="ltr" style="text-align: left;" trbidi="on">
ಮತ್ತೆ ಬಂದಿದೆ ಯುಗಾದಿ<br />
ಮತ್ತೊಂದು ಯುಗಾಂತ್ಯ<br />
ಕಳೆದ ಯುಗದಲಿ ಗಳಿಸಿದ್ದೆಷ್ಟೊ, ಉಳಿಸಿದ್ದೆಷ್ಟೊ, ಕಳೆದಿದ್ದೆಷ್ಟೊ<br />
ಹೊಸ ಯುಗದಲಿ ಸ್ನೇಹ ಗಳಿಕೆಯಾಗಲಿ, ಬಾಂಧವ್ಯ ಉಳಿಯಲಿ, ದ್ವೇಷ ಕಳೆದುಹೋಗಲಿ<br />
ಯುಗಾದಿ ಹಬ್ಬದ ಶುಭಾಶಯಗಳು</div>
ಸತೀಶ್ ಪೂಜಾರhttp://www.blogger.com/profile/09784897328590782695noreply@blogger.com0tag:blogger.com,1999:blog-5100008157860188478.post-26054923434679896692015-03-21T09:16:00.001+05:302015-03-21T09:18:46.606+05:30ಮತ್ತೆ ಉದಯಿಸುವ 'ರವಿ'<div dir="ltr" style="text-align: left;" trbidi="on">
<span style="font-size: large;">ಜಗವೆಲ್ಲ ಆವರಿಸಿದೆ ಕತ್ತಲು.. ಗಾಢಾಂಧಕಾರ..</span><br />
<span style="font-size: large;">ಎಲ್ಲಿಯವರೆಗೆ...?</span><br />
<span style="font-size: large;">ಜನ ದೀಪ ಹಚ್ಚುತ್ತಿಹರು.. ಮನೆ ಮನಗಳಲ್ಲಿ...</span><br />
<span style="font-size: large;">ಅದೇ ಭರವಸೆಯ ಬೆಳಕು..</span><br />
<span style="font-size: large;">ಮತ್ತೆ ಉದಯಿಸುವ 'ರವಿ'</span><br />
<span style="font-size: large;">-------------------------</span><br />
<span style="font-size: large;">ಡಿ. ಕೆ. ರವಿಯವರಿಗೆ ಅರ್ಪಣೆ</span></div>
ಸತೀಶ್ ಪೂಜಾರhttp://www.blogger.com/profile/09784897328590782695noreply@blogger.com0tag:blogger.com,1999:blog-5100008157860188478.post-75551599654494558122014-11-10T20:46:00.002+05:302015-03-21T09:35:02.294+05:30ನೀನಿಲ್ಲದೆ...<div dir="ltr" style="text-align: left;" trbidi="on">
<span style="font-size: large;">ಮೊದಲ ಮಳೆಯಂತೆ ಇಳಿದೆ ನನ್ನಲಿ..</span><br />
<span style="font-size: large;">ಮುಂಜಾನೆ ಬೇಗ ಎದ್ದು ರೆಡಿಯಾಗಿದ್ದು ಅದೇ ಮೊದಲ ಸಲ ಇರಬೇಕು. ಮನಸ್ಸಿನಲ್ಲಿ ಏನೋ ಒಂಥರಾ ಖುಷಿ, ಸಡಗರ, ಸ್ವಲ್ಪ ಭಯ ಎಲ್ಲವೂ ಒಟ್ಟೊಟ್ಟಿಗೆ ಶುರುವಾಗಿತ್ತು. ಮಳೆಗಾಲ ಆರಂಭದ ಸಮಯ, ಜೊತೆಗೆ ಜೀವನದ ಕನಸಾದ ಇಂಜಿನೀಯರಿಂಗೂ ಆರಂಭವಾಗಿತ್ತು. ಕಾಲೇಜಿಗೆ ಹೊರಡುವ ಮುಂಜಾನೆ ಸಣ್ಣದಾಗಿ ಸುರಿಯುತ್ತಿದ್ದ ಜಿಟಿ ಜಿಟಿ ಮಳೆಹನಿಗಳೇ ಸ್ನೇಹಿತರು. ಬಿಸಿ ಬಿಸಿ ಚಹಾ ಹೀರಿ ಕೊಡೆ ಹಿಡಿದು ಹೊರಟವನಿಗೆ ಕಾಲೇಜು ರಸ್ತೆಯಲ್ಲಿ ಕಂಡಿದ್ದೇ ಅವಳು. ಮಳೆಗಾಲದ ಮೊದಲ ಮಳೆಹನಿಯ ನೆರಳಿನಲ್ಲಿ ಕಂಡ ಅವಳು ಹೃದಯದಲ್ಲಿ ಶಾಶ್ವತವಾಗಿ ನಿಂತುಬಿಟ್ಟಳು. ಊಹುಂ ಅವಳು ಯಾರೆಂದು ಗೊತ್ತಿಲ್ಲ. ಮೊದಲ ದಿನ ತನ್ನಂತೆಯೇ ಅವಳೂ ಕಾಲೆಜು ಬಸ್ಸಿಗೆ ಕಾಯುತ್ತಿರಬಹುದು. ಖಂಡಿತ ಜೀವನದ ಮೊದಲ ಪ್ರೀತಿ ಆರಂಭವಾಗಿದ್ದು ಇಲ್ಲಿಂದಲೇ..</span><br />
<span style="font-size: large;">ಮೊದಲ ಮಳೆ ಹನಿಯಂತೆ.</span><br />
<span style="font-size: large;">ಮನಸ್ಸಲ್ಲೆಲ್ಲ ಅವಳದೇ ಧ್ಯಾನ.. ಹಿಂದಿನಿಂದ ಗೌತಮ್ ಗೌತಮ್ ಎಂದು ಸ್ನೇಹಿತ ಕರೆದಾಗಲೇ ಅರಿವಾಗಿದ್ದು ಕಾಲೇಜು ಬಸ್ಸು ಆಗಲೇ ಬಂದು ನಿಂತಿದೆ ಎಂದು.</span><br />
<span style="font-size: large;">ಮುಂದುವರೆಯುವದು......</span></div>
ಸತೀಶ್ ಪೂಜಾರhttp://www.blogger.com/profile/09784897328590782695noreply@blogger.com0tag:blogger.com,1999:blog-5100008157860188478.post-46086538552617751522014-09-26T21:15:00.001+05:302014-11-27T18:26:42.380+05:30ಬಲ್ಲವ<div dir="ltr" style="text-align: left;" trbidi="on">
<span style="font-size: large;">ಎಲ್ಲ ಬಲ್ಲವರಿಲ್ಲ ಜಗದಲ್ಲಿ</span><br />
<span style="font-size: large;">ಎಲ್ಲ ಬಲ್ಲೆನೆಂದು ಬೀಗುತಿರುವವನು</span><br />
<span style="font-size: large;">ಬೆಲ್ಲ ತಿಂದೆನೆಂಬ ಭ್ರಮೆಯಲ್ಲಿರುವವನು</span><br />
<span style="font-size: large;">ನಿಜವಾದ ಜ್ಞಾನದ ಸವಿಬೆಲ್ಲ ಬೇರೆಲ್ಲಿಹುದೋ</span><br />
<span style="font-size: large;"> </span></div>
ಸತೀಶ್ ಪೂಜಾರhttp://www.blogger.com/profile/09784897328590782695noreply@blogger.com0